ಸರ್ರನೇ ಬರ್ರನೇ
ಗಿರಗಿರ ಸುತ್ತುವ
ಕೆಟ್ಟ ಬಿರುಗಾಳಿಗೆ
ಸಿಕ್ಕ ಮನ
ಟಪ್ಪೆಂದು
ಗೋಣು ಮುರಿದಿದೆ
ಸತ್ತ ಮನದ ಹೆಣಭಾರವ
ಹೊತ್ತ ಜೀವ ನಲುಗಿದೆ
ಸತ್ತ ಮನಕೆ
ಸಂಸ್ಕಾರ ಬೇಡವೇ?
ಕೊಳೆತು ನಾರೀತು ಜೋಕೇ!
ಮಣ್ಣಿಗಿಡುವೆಯಾ
ಅಗ್ನಿಗಿಡುವೆಯಾ
ಸಾಗಲಿ ಕಾರ್ಯ
ಆದಷ್ಟು ಬೇಗ
ಕೊಳೆತು ಕ್ರಿಮಿ
ಯಾಡುವ ಮೊದಲೇ
ಗಬ್ಬುನಾತ ವ್ಯಾಪಿಸುವ
ಮುನ್ನ
ಹೂತುಬಿಡು ಮಣ್ಣಿನೊಳಗೆ!
ಮರೆತು ಎಲ್ಲಾ ಕೊನೆಗೆ
ಹುಟ್ಟಲ್ಲೊಂದು ಹೊಸಮನ
ಚಿಗುರಿ ಪಲ್ಲವಿಸಲಿ ಚೈತ್ರವನ
ಸತ್ತಮನದ ಸಮಾಧಿ
ಒಳಗಿನಿಂದ
ಎದ್ದು ಬಾರದಿರಲಿ
ಭೂತಗಳು
*****
Related Post
ಸಣ್ಣ ಕತೆ
-
ಕೆಂಪು ಲುಂಗಿ
ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…
-
ಇನ್ನೊಬ್ಬ
ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…
-
ಯಿದು ನಿಜದಿ ಕತೀ…
ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ... ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ, ವುಗಾದಿ… Read more…
-
ನಾಗನ ವರಿಸಿದ ಬಿಂಬಾಲಿ…
ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…
-
ಗದ್ದೆ
ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…